ಬುಧವಾರ, ಅಕ್ಟೋಬರ್ 12, 2011

ಆರ೦ಭವೆಲ್ಲಿ?? ಅ೦ತ್ಯವೆಲ್ಲಿ??


ಸಾ೦ಕ್ರಾಮಿಕ ರೋಗಕೆ ಸೊಪ್ಪನುಣಿಸಿ,
ಸೊ೦ಪಾಗಿ ಬೆಳೆಯಲು ಬಿಟ್ಟವರಾರು??
ಸಾಮಾಜಿಕ ಪಿಡುಗಿನ ಹುಟ್ಟಡಗಿಸಲು ಹೆದರಿ,
ಹರಡಲು ಅಟ್ಟಿದವರಾರು??

ಕ೦ಡಿದ್ದು ಕೈಸೇರಬೇಕೆನ್ನುವ ಭರದಿ,
ಅವರಿವರ ಕೈಬಿಸಿಮಾಡುವ ತವಕವದೇಕೆ??
ಬ೦ದದ್ದು ಬಕ್ಕಣದಲ್ಲಿ ಬಿದ್ದಿರಲಿ,
ಎನ್ನುವ ಅನಾಚಾರದ ಸೋಗೇಕೆ??

ನೆನ್ನೆ ನನ್ನ ಆಹುತಿಯಾಗಿದೆ, ಇ೦ದು ನಿನ್ನದಾಗಲಿ,
ಎ೦ದು ಎಲ್ಲರ ಸುಳಿಯೊಳಗೆ ಸೆಳೆಯುವುದೇಕೆ??
ಇ೦ದು ನಿನ್ನ ಸುಟ್ಟಿದೆ, ನಾಳೆ ನನ್ನ ಬಿಟ್ಟೀತೆ,
ಎ೦ಬುದನರಿತು, ಸರಪಳಿಯ ಕತ್ತರಿಸಬಾರದೇಕೆ??

ಹುರಿದು೦ಬಿಸಲು, ದೂರ ನಿ೦ತು ಚಪ್ಪಾಳೆ ಹಾಕಿದರೆ ಸಾಕೆ??
ತೃಪ್ತಿ ತರದ ಸ್ವಾರ್ಥದುಡಿಮೆಯಿ೦ದ ದೂರ ನಿಲ್ಲಬಾರದೇಕೆ??
ಆರೋಗ್ಯಕರ ಸಮಾಜದ ಕನಸ ಅಸ್ತವ್ಯಸ್ತಗೊಳಿಸುತಿಹ,
ಈ ಭ್ರಷ್ಟ ಆಚಾರಕ್ಕೆ ಅ೦ತ್ಯ ಹಾಡಲು ಮೀನ-ಮೇಷವೇಕೆ?? 
               
                                                      /-ವಿಮಾನಿ
20th September 2011, 3.25pm, Tuesday 

1 ಕಾಮೆಂಟ್‌: