ಕೊಟ್ಟರಾಯಿತು ಬಿಡಿ, ನಮ್ಮ ಕೆಲಸಕ್ಕಲ್ಲವೆ,
ಎನ್ನುವ ಅದೆಷ್ಟೋ ವ್ಯಭಿಚಾರಿಗಳು..
ಇವರ ಈ ಆಚಾರಕ್ಕೆ ಸೊಪ್ಪು ಹಾಕಲು ತ್ರಾಣವಿರದೆ,
ತತ್ತರಿಸುವ ಅನೇಕಾನೇಕ ಬಡ ಜೀವಿಗಳು..
ಕೊಟ್ಟರೂ, ಕೊಡದೇ ಹೋದರೂ, ಸುಡುವ ಬಿಸಿ ತುಪ್ಪ..
ಇದರ ಸುಳಿಗೆ ಸಿಲುಕದವನಾರಿಹನು ನಿಜ ಭೂಪ??
ಕೊಟ್ಟವನು ಕೋಡ೦ಗಿ.. ಬಾಗಿಲಿಗೆ ಬ೦ದ ಭಾಗ್ಯವ
ಬೇಡವೆನ್ನಲು ನನಗೆ ಬುದ್ಧಿಭ್ರಮಣೆಯೆ ಎನ್ನುವ ಭ್ರಷ್ಟ ನಿಲುವು..
ಇದೇ ನಿಲುವ೦ಗಿಯ ಧರಿಸಿ, ರಾಜಾರೋಷದಿ ಬೀಗುವ,
ಜನರೇ ಹಲವು, ಅವರದೇ ಬಲವು...
ಯಾರದ್ದು ಸೋಲು? ಯಾರದ್ದು ಗೆಲುವು??
ನಡುವಲ್ಲಿ ಪರಿತಪಿಸುವ ನಾವು-ನೀವುಗಳು,
ಅತ್ತ ತತ್ತರಿಸುವ ಬಡ ಜೀವಿಗಳೂ ಅಲ್ಲದ,
ಇತ್ತ ಕೊಟ್ಟು ಕೈತೊಳೆದುಕೊಳ್ಳೊ ವ್ಯಭಿಚಾರಕ್ಕು ಸೈ ಎನ್ನದ,
ಸರಿ ತಪ್ಪುಗಳ ತಕ್ಕಡಿಯ ತೂಗಿ ನೋಡುತ,
ತ್ರಿಶ೦ಕು ಸ್ವರ್ಗದಲಿ ತೇಲಾಡುವ, ನಮ್ಮ ಬಾಳೆ ಗೋಳು..
/-ವಿಮಾನಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ